ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Sunday, January 26, 2014

ಗಣರಾಜ್ಯೋತ್ಸವ! ಭಾರತೀಯ ಪ್ರಜಾಪ್ರಭುತ್ವದ ಹಬ್ಬ!




ಗಣರಾಜ್ಯೋತ್ಸವ! ಭಾರತೀಯ ಪ್ರಜಾಪ್ರಭುತ್ವದ ಹಬ್ಬ!
ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಹಾಗೂ ಗಣರಾಜ್ಯೋತ್ಸವ (ಜನವರಿ 26) ನಮ್ಮ
ರಾಷ್ಟ್ರೀಯ ಹಬ್ಬಗಳು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಮ್ಮೆಯ ದಿನಗಳು.                           

ಭಾರತ ಜಗತ್ತಿನ ಹಳೆಯ ರಾಷ್ಟ್ರಗಳಲ್ಲಿ ಒಂದು. ಇದು `ರಾಷ್ಟ್ರ' ಎಂಬ ಕಲ್ಪನೆ
ಋಗ್ವೇದದಲ್ಲಿಯೇ ಇದೆ. ಹಾಗೆಯೇ ಇದು `ಗಣರಾಜ್ಯ' ಎಂಬ ಕಲ್ಪನೆ ವೈದಿಕ ಹಾಗೂ ಬೌದ್ಧ
ಸಾಹಿತ್ಯದಲ್ಲಿ ಸಿಗುತ್ತದೆ.

1947ರ ಆಗಸ್ಟ್ 15 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರರಾದ ನಂತರ ನಾವು ಆಧುನಿಕ
ಸಂಸದೀಯ ಪ್ರಜಾತಂತ್ರವನ್ನು ಅಳವಡಿಸಿಕೊಂಡೆವು. 1950ರ ಜನವರಿ 26 ರಂದು ನಮ್ಮ ಹೊಸ
ಸಂವಿಧಾನ ಜಾರಿಗೆ ಬಂದಿತು. ಅಂದಿನಿಂದ ಆಧುನಿಕ ಅರ್ಥದಲ್ಲಿ ಭಾರತ `ಗಣರಾಜ್ಯ'ವಾಯಿತು.
ನೂರಾರು ವರ್ಷಗಳ ನಂತರ ಭಾರತೀಯರೆಲ್ಲರೂ ಶಾಸನಾತ್ಮಕವಾಗಿ ಮತ್ತೆ ಒಂದೇ ಸಕರ್ಾರದ
ಅಡಿಯಲ್ಲಿ ಇರುವಂತಾಯಿತು. ಅಂದಿನಿಂದ ನಾವು ಪ್ರತಿ ವರ್ಷ ಜನವರಿ 26 ರಂದು
ಗಣರಾಜ್ಯೋತ್ಸವ (ರಿಪಬ್ಲಿಕ್ ಡೇ) ಆಚರಿಸುತ್ತೇವೆ.

ಈ ಆಚರಣೆಯ ಅಂಗವಾಗಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಭಾರಿ ಮಿಲಿಟರಿ ಪೆರೇಡ್
(ಕವಾಯತು) ಹಾಗೂ ಸಾಂಸ್ಕೃತಿಕ ಮೆರವಣಿಗೆಗಳು ನಡೆಯುತ್ತವೆ. ಯಾರಾದರೂ ವಿದೇಶಿ
ಸಕರ್ಾರದ ಮುಖ್ಯಸ್ಥರನ್ನು ಆಮಂತ್ರಿಸಿ ಅವರ ಸಮ್ಮುಖದಲ್ಲಿ ದೇಶದ ಮಿಲಿಟರಿ ಹಾಗೂ
ಸಾಂಸ್ಕೃತಿಕ ಶಕ್ತಿಯ ಪ್ರದರ್ಶನ ಮಾಡಲಾಗುತ್ತದೆ.

ದೇಶದ ರಾಷ್ಟ್ರಪತಿಯ ನಿವಾಸವಾದ `ರಾಷ್ಟ್ರಪತಿ ಭವನ'ದ ಬಳಿ ಇರುವ ರೈಸಿನಾ ಹಿಲ್ನಿಂದ
ಆರಂಭವಾಗುವ ಮೆರವಣಿಗೆ ರಾಜಪಥ್ ಉದ್ದಕ್ಕೂ ತೆರಳಿ ಇಂಡಿಯಾ ಗೇಟ್ (ಹುತಾತ್ಮ ಸೈನಿಕರ
ಸ್ಮಾರಕ) ದಾಟಿ ಹಳೆಯ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯನ್ನು ತಲುಪುತ್ತದೆ.

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳ ವಿವಿಧ ವೀಭಾಗಗಳ ಯೋಧರು ತಮ್ಮ ಸಮವಸ್ತ್ರ ಹಾಗೂ
ಅಧಿಕೃತ ಪದಕಗಳನ್ನು ಧರಿಸಿ ಕವಾಯತಿನಲ್ಲಿ ಭಾಗವಹಿಸುತ್ತಾರೆ. ದೇಶದ
ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗಳಿಗೆ ಗೌರವವಂದನೆ (ಸೆಲ್ಯೂಟ್) ಅಪರ್ಿಸುತ್ತಾರೆ.
ಛೀಫ್ ಗೆಸ್ಟ್ ಆಗಿರುವ ವಿದೇಶಿ ಮುಖ್ಯಸ್ಥರು ರಾಷ್ಟ್ರಪತಿಗಳ ಜೊತೆ ಮೆರವಣಿಗೆ
ವೀಕ್ಷಿಸುತ್ತಾರೆ.

ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯ ತಂಡಗಳು, ಜಾನಪದ ತಂಡಗಳು, ವಿವಿಧ
ರಾಜ್ಯಗಳನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳು ಭಾಗವಹಿಸುತ್ತವೆ. ತಮ್ಮ
ಸಮಯಸ್ಫೂತರ್ಿ ಹಾಗೂ ಸಾಹಸ ಮನೋಭಾವಗಳಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿ
`ರಾಷ್ಟ್ರೀಯ ಶೌರ್ಯ ಪ್ರಶಸ್ತಿ' ಪಡೆದ ಮಕ್ಕಳನ್ನು ಆನೆಯ ಮೇಲಿನ ಅಂಬಾರಿಯಲ್ಲಿ
ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ!

ನವದೆಹಲಿಯಂತೆಯೇ ವಿವಿಧ ರಾಜ್ಯಗಳ ರಾಜಧಾನಿಗಳಲ್ಲೂ ಮೆರವಣಿಗೆ, ಪೊಲೀಸರ ಕವಾಯತು
ನಡೆಯುತ್ತದೆ. ಆಯಾ ರಾಜ್ಯಗಳ ರಾಜ್ಯಗಳ ರಾಜ್ಯಪಾಲರುಗಳು ಗೌರವವಂದನೆ
ಸ್ವೀಕರಿಸುತ್ತಾರೆ.    
                                                                                                                              ಲೇಖನ:
                                                                                                        SHRI H S RAMACHANDRAPPA
                                                                                       

No comments: